/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಹಣ ಮರುಪಾವತಿ ವಿಳಂಬ – ಕೊಳ್ಳೇಗಾಲ ಕಸಬಾ ಕೃಷಿ ಪತ್ತಿನ ಬ್ಯಾಂಕ್ ಗೆ ಬೀಗ ಜಡಿದ ಜನರು
Image

ಹಣ ಮರುಪಾವತಿ ವಿಳಂಬ – ಕೊಳ್ಳೇಗಾಲ ಕಸಬಾ ಕೃಷಿ ಪತ್ತಿನ ಬ್ಯಾಂಕ್ ಗೆ ಬೀಗ ಜಡಿದ ಜನರು

ಕೊಳ್ಳೇಗಾಲ. ಕಸಬಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಠೇವಣಿ ಮಾಡಿ ಹಣವನ್ನು ವಾಪಸ್ ಪಡೆಯಲಾಗದೆ ಪರದಾಡುತ್ತಿರುವ ಠೇವಣಿದಾರರು ಸೋಮವಾರ ಬ್ಯಾಂಕ್‌ಗೆ ಬೀಗ ಹಾಕಿ ಧರಣಿ ನಡೆಸಿದರು.

ಪಟ್ಟಣದ ಬಸ್ತೀಪುರ ರಸ್ತೆಯಲ್ಲಿರುವ ಬ್ಯಾಂಕ್ ಶಾಖೆಯ ಗೇಟ್‌ಗೆ ಬೀಗ ಜಡಿದು, ಸುಮಾರು 30 ಕ್ಕೂ ಹೆಚ್ಚು ಠೇವಣಿದಾರರು ಕುಳಿತು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 50 ರಿಂದ 60 ಮಂದಿ ಠೇವಣಿದಾರರು ಈ ಬ್ಯಾಂಕ್‌ನಲ್ಲಿ ಒಟ್ಟು ₹3 ಕೋಟಿಗೂ ಹೆಚ್ಚು ಮೊತ್ತವನ್ನು ಠೇವಣಿ ಇಟ್ಟಿದ್ದಾರೆ. ಆದರೆ ಕಳೆದ ಹಲವು ತಿಂಗಳಿಂದ ಬ್ಯಾಂಕ್ ಆಡಳಿತ ಹಣ ನೀಡದೆ ನಮ್ಮನ್ನು ದಿನನಿತ್ಯ ಅಲೆದಾಡಿಸುತ್ತಿದೆ. ನಮ್ಮ ಠೇವಣಿಯನ್ನು ತಕ್ಷಣ ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.

ಠೇವಣಿದಾರರ ತಮ್ಮ ಹಣವನ್ನು ವಾಪಸ್ ಪಡೆಯುವವರೆಗೆ ಪ್ರತಿಭಟನೆಯನ್ನು ಮುಂದುವರಿಸುವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕೃಷ್ಣ ಮಧುವನಹಳ್ಳಿ 14 ಲಕ್ಷ, ನಾಗರಾಜಪ್ಪ ಹೊಂಡರಬಾಳು 5 ಲಕ್ಷ, ವಿಜಯಕುಮಾರ್ ಬಸವೇಶ್ವರನಗರ, ರಾಜೇಂದ್ರ ಕೊಳ್ಳೇಗಾಲ, ಮಹದೇವಮ್ಮ ಹರಳೆ 20ಲಕ್ಷ, ಮಾದಮ್ಮ ಸಿದ್ದಯ್ಯನಪುರ 1.5 ಲಕ್ಷ, ಮಹದೇವಮ್ಮ ಮುಳ್ಳೂರು , ಜಯಮ್ಮ ಸಿದ್ದಯ್ಯನಪುರ 1 ಲಕ್ಷ, ಮಿಥಿಲೇಸ್ ಎಂ ಕೊಳ್ಳೇಗಾಲ, ಬಸ್ತೀಪುರ ಮಮತಾ, ದೀಪಾ ಸಿಂಗನಲ್ಲೂರು 6.5 ಲಕ್ಷ, ಗಿರೀಶ್ 3ಲಕ್ಷ, ಪುಟ್ಟಮ್ಮ ಸಿದ್ದಯ್ಯನಪುರ 13 ಗ್ರಾಮ್ ಚಿನ್ನ, ಶಿವಮ್ಮ ಮುಳ್ಳೂರು, ಚಿಕ್ಕಮಾದಮ್ಮ ಬಸ್ತೀಪುರ 40 ಸಾವಿರ, ಬೋರಮ ಬಸ್ತೀಪುರ 1 ಲಕ್ಷ,
ಚೌಡೇಶ್ವರಿ ಮಹಿಳಾ ಸಂಘ 40 ಸಾವಿರ, ಕಾಮಗೆರೆ ದೇವೇಂದ್ರ ಸ್ವಾಮಿ 13 ಲಕ್ಷ, ಗೋವಿಂದರಾಜು 2.15 ಲಕ್ಷ ಹಾಗೂ ಇತರರು ಇದ್ದರು.

ಬಳಿಕ ಪ್ರತಿಭಟನಾ ಸ್ಥಳಕ್ಕೆ ಪಿಎಸಿಸಿಎಸ್ ಉಪಾಧ್ಯಕ್ಷರು ಶೇಖರ್, ನಿರ್ದೇಶಕರು ಮಂಜುನಾಥ್, ರವಿ ಭೇಟಿ ನೀಡಿ, ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲಾ ಠೇವಣಿದಾರರ ಹಣದ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದ ಮೇರೆಗೆ ಪ್ರತಿಭಟನೆ ಕೈಬಿಟ್ಟು ಠೇವಣಿದಾರರು ವಾಪಸ್ಸು ಮನೆಗೆ ತೆರಳಿದರು.

Releated Posts

ಕೊಳ್ಳೇಗಾಲ ಭೀಮನಗರದ ಮೈಸೂರಿನಲ್ಲಿ ಇರುವ ಗುಪ್ತಚರ ಎಎಸ್ಐ ಶಿವಕುಮಾರ್ ಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ

ಕೊಳ್ಳೇಗಾಲ/ ಮೈಸೂರು : ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಹಾಲಿ ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಶಿವಕುಮಾರ್ ಅವರು ಮುಖ್ಯಮಂತ್ರಿ ಗಳ ಪದಕ…

ByByN Rajesh Apr 3, 2026

ಕೊಳ್ಳೇಗಾಲ : ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ – ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು…

ByByN Rajesh Apr 1, 2026

ನಿವೃತ್ತಿಯಾದ ಸೆಸ್ಕಾಂ ಎಇಇ ಎಂ ರಾಜು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ…

ByByN Rajesh Mar 31, 2026

Leave a Reply

Your email address will not be published. Required fields are marked *

Scroll to Top