/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಟಿ.ನರಸೀಪುರ : ಪೋಲಿಸ್ ಅಧಿಕಾರಿಗಳ ಮೇಲೆ ಸುಳ್ಳು ಆರೋಪಕ್ಕೆ ದಲಿತ ಮುಖಂಡರು ಖಂಡನೆ
Image

ಟಿ.ನರಸೀಪುರ : ಪೋಲಿಸ್ ಅಧಿಕಾರಿಗಳ ಮೇಲೆ ಸುಳ್ಳು ಆರೋಪಕ್ಕೆ ದಲಿತ ಮುಖಂಡರು ಖಂಡನೆ

ಮೂಗೂರು: ಟಿ ನರಸೀಪುರ ಟೌನ್ ಪೊಲೀಸ್ ಠಾಣೆಯ ದಕ್ಷ ಪೊಲೀಸ್ ಇನ್ಸ್ಪೆಕ್ಟರ್ ಧನ೦ಜಯ್ ಹಾಗೂ ಸಬ್ ಇನ್ಸ್ಪೆಕ್ಟರ್ ಜಗದೀಶ್ ರವರ ವಿರುದ್ಧ ಪಟ್ಟಭದ್ರ ವ್ಯಕ್ತಿಗಳು :ಹಾಗೂ ಕೆಲವು ಸಂಘಟನೆ ಮುಖಂಡರುಗಳು ಇಲ್ಲಸಲ್ಲದ್ದ ಆರೋಪ ಮಾಡುತ್ತಿರುವುದನ್ನು ಇಲ್ಲಿನ ದಲಿತ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ

ಇಲ್ಲಿನ ಖಾಸಾಗಿ ಹೋಟಲ್ ನಲ್ಲಿ ಕೆರೆಯಲಾಗಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಮುಖಂಡ ಎಂ.ಎಂ. ಜಗದೀಶ್ ಮಾತನಾಡಿ ನಿಷ್ಠ ವಂತ ದಕ್ಷ ಪೋಲೀಸ್ ಇನ್ಸ್ಪೆಕ್ಟರ್ ಧನಂಜಯ್ ರವರು ತಾಲೂಕಿನಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ ಕಾನೂನು ಸುವ್ಯಸ್ಥೆಗೆ ಮೊದಲ ಅಧ್ಯತೆ ನೀಡಿ ಕಳ್ಳ ಕಾಕರು ಜೂಜುಕೊರರು ಪುಂಡ ಪೋಲಿಗಳನ್ನು ಜೈಲುಗಟ್ಟುವ ಮೂಲಕ ಸಾಕಷ್ಟು ಸುದಾರಣೆ ಮಾಡಿದ್ದಾರೆ ಹಾಗೂ ಪಟ್ಟಣದ ಮುಖ್ಯ ರಸ್ತೆಗಳನ್ನು ಬೀದಿ ಬದಿ ವ್ಯಾಪಾರಿಳು ಅಕ್ರಮಿಸಿಕೊಂಡು ವ್ಯಾಪಾರ ವಾಹಿವಾಟು ನಡೆಸಿ ತಿರುಗಾಡಲು ತೊಂದರೆ ನೀಡುತಿದ್ದರು. ಇದನ್ನು ಮನಗಂಡ ಪೋಲೀಸ್ ಅಧಿಕಾರಿಗಳು ರಸ್ತೆಬದಿ ವ್ಯಾಪಾರಿಗಳಿಗೆ ತಿಳಿಹೇಳುವುದರ ಮೂಲಕ ಇವರನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸ್ವಕ್ಷೇತ್ರ ಶಾಸಕ ಹಾಗೂ ಸಚಿವರಾದ ಹೆಚ್. ಸಿ ಮಹದೇವಪ್ಪ ರವರಿಂದಲೇ ಕೆಲಸ ವೈಖರಿಯಲ್ಲಿ ಪ್ರಸಂಸೆ ಹೊಂದಿದ್ದಾರೆ ಇಂಥ ಪ್ರಮಾಣಿಕ ದಕ್ಷ ಪೋಲೀಸ್ ಅಧಿಕಾರಿಗಳುನ್ನು ಸಹಿಸದ ಕೆಲವು ಸಂಘಟನೆ ಮುಖಂಡರುಗಳು ತಮ್ಮ ವ್ಯಯಕ್ತಿಕ ವಿಚಾರಕ್ಕೆ ನಿಷ್ಠ ವಂತ ಖಡಕ್ ಪೋಲೀಸ್ ಅಧಿಕಾರಿ ಗಳ ವಿರುದ್ಧ ಇಲ್ಲ ಸಲ್ಲಿದ ಆರೋಪ ಮಾಡುತ್ತಿದ್ದಾರೆ ಎಂದರು.

ಮುಖಂಡ ಕೃಷ್ಣಸ್ವಾಮಿ ಮಾತನಾಡಿ ಪೋಲೀಸ್ ಠಾಣೆಗಳಲ್ಲಿ ದಳ್ಳಾಳಿಗಳಿಗೆ ಅವಕಾಶ ನೀಡದಿರುವುದನ್ನು ಸಹಿಸದ ಕೆಲವರು ಇವರ ವಿರುದ್ಧ ಎತ್ತು ಕಟ್ಟಿ ಇಲ್ಲಸಲ್ಲದ ಆರೋಪದ ಹುನ್ನಾರ ನಡೆಸುತ್ತಿದ್ದಾರೆ ದಕ್ಷ ಪೊಲೀಸ್ ಅಧಿಕಾರಿಯ ಮುಖಕ್ಕೆ ಮಸಿ ಬಳಿಯುವ ಕುತಂತ್ರ ಕಾರ್ಯ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು
ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಒದಗಿಸುವ ಜನಸಾಮಾನ್ಯರಿಗೆ ಇವರು ಸಂಘ ಸಂಸ್ಥೆಗಳ ಮಧ್ಯಸ್ಥಿಕೆ ವಹಿಸುವುದು ಖಂಡಿಸುವುದು ಕೆಲವರಿಗೆ ಸಹಿಸಿಕೊಳ್ಳಲಾಗುತ್ತಿರಲಿಲ್ಲ
ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷ ಮದನ್ ರಾಜ್ ರವರು ಪೋಲೀಸ್ ಅಧಿಕಾರಿಯನ್ನು ವಸಲಿಗಾರ ದಂದೆಕೋರ ಎಂದು ಹೇಳಿರುವುದು ಸಮಂಜಸವಲ್ಲ ಎಂದರು. ಇದನ್ನು ಮೂಗೂರು ಹೋಬಳಿ ಮುಖಂಡರುಗಳು ಖಂಡಿಸುತ್ತವೆ ಯಾರೆ ಯಾಗಲಿ ಸಂಘ-ಸಂಸ್ಥೆ ಮುಖಂಡರುಗಳಾಗಲಿ ಇವರನ್ನು ತೇಜೆವದೆ ಮಾಡುವುದನ್ನು ಕೈ ಬಿಡಬೇಕು ಎಂದರು.

ಪ್ರತಿಕಾಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಪುಟ್ಟ ಮಾದಯ್ಯ, ಮಹೇಶ್, ಹಾಗೂ ಮುಖಂಡುಗಳಾದ ರಾಜಣ್ಣ, ಚಿಕ್ಕಮಾಧು, ಸುಧೀರ್, ವಿಕಾಶ್, ಮಹದೇವ್ ಸೇರಿದಂತೆ ಇತರರು ಇದ್ದರು..

Releated Posts

ಕೊಳ್ಳೇಗಾಲ ಭೀಮನಗರದ ಮೈಸೂರಿನಲ್ಲಿ ಇರುವ ಗುಪ್ತಚರ ಎಎಸ್ಐ ಶಿವಕುಮಾರ್ ಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ

ಕೊಳ್ಳೇಗಾಲ/ ಮೈಸೂರು : ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಹಾಲಿ ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಶಿವಕುಮಾರ್ ಅವರು ಮುಖ್ಯಮಂತ್ರಿ ಗಳ ಪದಕ…

ByByN Rajesh Apr 3, 2026

ಕೊಳ್ಳೇಗಾಲ : ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ – ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು…

ByByN Rajesh Apr 1, 2026

ನಿವೃತ್ತಿಯಾದ ಸೆಸ್ಕಾಂ ಎಇಇ ಎಂ ರಾಜು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ…

ByByN Rajesh Mar 31, 2026

Leave a Reply

Your email address will not be published. Required fields are marked *

Scroll to Top